ಶಿಡ್ಲಘಟ್ಟ: ಶಿವಕುಮಾರ ಸ್ವಾಮೀಜಿ 3ನೇ ವರ್ಷದ ಪುಣ್ಯಸ್ಮರಣೆ ಸರಳ ಆಚರಣೆ ಶಿಡ್ಲಘಟ್ಟ ನಗರದ ಭುವನೇಶ್ವರ ವೃತ್ತದಲ್ಲಿ ಕರ್ನಾಟಕ ಜನಸೈನ ವತಿ ಯಿಂದ ಪೂಜೆ ಕಾರ್ಯಕ್ರಮ ಆಯೋಜಿಸಲಾಗಿತ್ತು
ಶಿಡ್ಲಘಟ್ಟ ನಗರದಲ್ಲಿ ಕೊರೊನಾ 3ನೇಅಲೆ ಹೆಚ್ಚಾಗಿರುವುದರಿಂದ ಸರಳವಾಗಿ ಆಚರಣೆ ಮಾಡಿ ಸಿಹಿ ಹಂಚಲಾಯಿತು.
ಸೋಮಶೇಖರ್ ಮಾತನಾಡುತ್ತಾ ತ್ರಿವಿಧ ದಾಸೋಹಿ ಮಠಾಧೀಶ ಡಾ ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾಗಿ ಮೂರು ವರ್ಷಗಳು. ಇಂದು ಅವರ 114ನೇ ವರ್ಷದ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ದೇಶಾದ್ಯಂತ, ನಾಡಿನಾದ್ಯಂತ ಗಣ್ಯರು, ರಾಜಕೀಯ
ನಾಯಕರು, ಜನಸಾಮಾನ್ಯರು ಶ್ರೀಗಳನ್ನು, ಅವರು ಮಾಡಿದ ಸಮಾಜ ಸೇವೆ, ದಾಸೋಹಗಳ ಬಗ್ಗೆ ಸ್ಮರಿಸುತ್ತಾರೆ
ಕರ್ನಾಟಕ ರತ್ನ ಅವರ ಇಹದ ಜೀವನ ಪಯಣ ಮುಗಿದು, ಶ್ರೀಗಳ ನಿರ್ಗಮನ ಬಳಿಕ ಈ ಕೊರೋನಾ ಮಹಾಮಾರಿ ಮಧ್ಯೆ ಅವರನ್ನು ನೆನೆದವರು ಅದೆಷ್ಟೋ ಮಂದಿ. ಕೋವಿಡ್ ಮೂರನೇ ಅಲೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಇಂದು ಸರಳ ಆಚರಣೆಯನ್ನು ಮಾಡಲಾಗುತ್ತದೆ.
ರಾಜ್ಯ ಸರ್ಕಾರವು ಇಂದು ಸ್ವಾಮೀಜಿಗಳ ಪುಣ್ಯಸ್ಮರಣೆ ಅಂಗವಾಗಿ ದಾಸೋಹ ದಿನ ಆಚರಿಸಲು ನಿರ್ಧರಿಸಿದೆ.
ಅನ್ನ, ಅಕ್ಷರ, ಆಶ್ರಯ ಎಂಬ ತ್ರಿವಿಧ ದಾಸೋಹ ಮೂಲಕ ಸಮಾಜವನ್ನು ಪೊರೆದವರು ಶ್ರೀಗಳು, ಬಸವಣ್ಣನ ಈ ವಚನದಂತೆ ಗುರುಗಳು ತ್ರಿವಿಧ ದಾಸೋಹದಲ್ಲಿ ಆರಾಧಿಸಿದರು.
ಗಣ್ಯರಿಂದ ಸ್ಮರಣೆ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳ ಪುಣ್ಯಸ್ಮರಣೆ ಜನತೆ ಅವರನ್ನು ಸ್ಮರಿಸುತ್ತಿದ್ದಾರೆ. ಜಗದೀಶ್. ಶ್ರೀಧರ್. ಎಂ.ಸೋಮಶೇಖರ್. ಕಿರಣ್. ನಾರಾಯಣ ಸ್ವಾಮಿ. ಮುಖೇಶ್. ರಿಸ್ವಾನ್ ಪಾಷ. ಬಾಲು. ಕುಮಾರ್. ಹಾಜರಿದ್ದರು.