ಚೆಂಬೆಳಕಿನ ಕವಿ ನಾಡೋಜ ಚೆನ್ನವೀರ ಕಣವಿಯವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಿಬಾರದ ನಷ್ಟವಾಗಿದೆ.ಸಮನ್ವಯದ ಕವಿ ಕಣವಿಯವರು ಕನ್ನಡದ ಅಸ್ಮಿತೆಯಂತೆ ಬದುಕಿದವರು.ಅವರ ಆತಕ್ಕೆ ಪರಮಾತ್ಮನು ಸದ್ಗತಿಯನ್ನು ಕರುಣಿಸಲೆಂದು ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ವಿಶ್ವಮಾನವ ಪ್ರತಿಷ್ಠಾನದ ಅಧ್ಯಕ್ಷ ಡಾ.ಕೈವಾರ ಶ್ರೀನಿವಾಸ್ ಪ್ರಾರ್ಥಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ರಕ್ಷಣಾ ವೇದಿಕೆಯ ಕನ್ನಡಿಗರ ಸಾರಥ್ಯದ ಜಿಲ್ಲಾಧ್ಯಕ್ಷ ಎನ್ ಅಂಬರೀಶ್ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮು. ಪಾಪಣ್ಣ. ಪಿಷ್ ಗೋಪಿ.ನಯಾಜ್ ಖಾನ್, ಉಪಸ್ಥಿತರಿದ್ದರು