Thursday, April 25, 2024
spot_img
HomeChikballapurಕಸಾಪ ಹಿರಿಯ ಸದಸ್ಯರು ಹಾಗೂ ನಿವೃತ್ತ ಶಿಕ್ಷಕರಾದ ಎಸ್ ಶಿವರಾಮ್‌ರವರಿಗೆ ಸನ್ಮಾನ

ಕಸಾಪ ಹಿರಿಯ ಸದಸ್ಯರು ಹಾಗೂ ನಿವೃತ್ತ ಶಿಕ್ಷಕರಾದ ಎಸ್ ಶಿವರಾಮ್‌ರವರಿಗೆ ಸನ್ಮಾನ

ಚಿಕ್ಕಬಳ್ಳಾಪುರ: ಅಖಂಡ ಕೋಲಾರ ಜಿಲ್ಲೆ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರು ಹಾಗೂ ನಿವೃತ್ತ ಶಿಕ್ಷಕರಾದ ಎಸ್ ಶಿವರಾಮ್ ರವರ ಸೇವೆಯನ್ನು  ಜಿಲ್ಲೆಯ  ಜನತೆ ಮರೆಯುವಂತಿಲ್ಲ ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷೆ ಉಷಾ ಶ್ರೀನಿವಾಸ್ ಬಾಬು ತಿಳಿಸಿದರು .

ಅವರು ತಮ್ಮ ಸಮಾನ ಮನಸ್ಕರೊಂದಿಗೆ ಎಸ್ ಶಿವರಾಮ್ ರವರ ಮನೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಕನ್ನಡ ಸಾರಸ್ವತ ಲೋಕಕ್ಕೆ ಹಾಗೂ ಕರ್ನಾಟಕ ಜಾನಪದ ಪರಿಷತ್ ಗೆ ಎಸ್ ಶಿವರಾಮ್ ರವರ ಸೇವೆ ಮತ್ತಷ್ಟು ಕಾಲ ಮುಂದುವರಿಯಲಿ ಎಂದು ಹಾರೈಸಿ ಶುಭಕೋರಿದರು .

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ವೈ ಎಲ್ ಹನುಮಂತರಾವ್ ಮಾತನಾಡಿ ಎಸ್ ಶಿವರಾಮ್ ರವರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅತ್ಯಂತ ಉತ್ತಮವಾದ ರೀತಿಯಲ್ಲಿ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದ್ದಾರೆ ಸಾಹಿತ್ಯ ಪರಿಷತ್ತಿಗೆ ಇವರ ಸೇವೆ ಈಗಲೂ ಅಗತ್ಯವಿದೆ ಎಂದರು .

ಸಾಹಿತಿ ಟಿ. ಎಸ್ .ನಾಗೇಂದ್ರಬಾಬು ಮಾತನಾಡಿ ಚಿಕ್ಕಬಳ್ಳಾಪುರ ದಲ್ಲಿ ಈ ಹಿಂದೆ ನಡೆದ ನಂದಿ ಉತ್ಸವ ಮಳೆ ದೇವಿ ಉತ್ಸವ ನಾಲ್ಕನೇ ಜಿಲ್ಲಾ ಕನ್ನಡ ಸಮ್ಮೇಳನ ಒಳಗೊಂಡಂತೆ ವಿವಿಧ ಕನ್ನಡಪರ ಕಾರ್ಯಕ್ರಮಗಳಲ್ಲಿ ಎಸ್ ಶಿವರಾಂ ಅವಿರತವಾಗಿ ಶ್ರಮಿಸಿದ್ದರು ಎಂದು ನೆನಪು ಮಾಡಿದರು.

ಕನ್ನಡಪರ ಹೋರಾಟಗಾರ ಕೆ .ಪಿ. ನೋಮಾನ್ ಮತ್ತಿತರರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments